ಈ ಜನ್ಮದಲ್ಲಿ ಯಡಿಯುರಪ್ಪನಿಗೆ ಮುಖ್ಯಮಂತ್ರಿ ಆಗಲು ಯೋಗ್ಯವಿಲ್ಲ ಅಂತ ಯಾರೋ ಜ್ಯೋತಿಷಿ ಹೇಳಿದ್ದನಂತೆ, ಅದೇ ಯಡೀಯುರಪ್ಪ ಮುಖ್ಯಮಂತ್ರಿ ಕುರ್ಚಿ ಮೇಲೆ ಕೂತು ಸುಮಾರು ೧೨ ದಿನಗಳು ಆಗ್ತಾ ಬಂತು. ಈಗ ಆ ಜ್ಯೋತಿಷಿ ಏನು ಮಾಡ್ತಾ ಇರಬಹುದು ಅಂತ ತುಂಬಾ ದಿನದಿಂದ ಯೋಚಿಸ್ತಾ ಇದೀನಿ. ಅದಕ್ಕೆ ಅಲ್ವಾ ಹೇಳೋದು, ಯಾರಾರು ಯಾವ ಕೆಲಸ ಮಾಡಬೇಕೋ ಆ ಕೆಲ್ಸ ಮಾಡಿದ್ರೆನೆ ಚೆಂದ ಅಂತ. ಅಲ್ಲಾ ರಾಜಕೀಯನೆಲ್ಲ ಜ್ಯೋತಿಷಿಗಳು ನಿರ್ಧರಿಸುವ ಹಾಗಿದ್ದರೆ, ಈ ಚುನಾವಣೆ ಯಾಕೆ ಬೇಕು, ಸುಮ್ನೆ "ಚುನಾವಣಾ ಪ್ರಾಧಿಕಾರ" (Election comission) ದವರು ಅಷ್ಟು ಖರ್ಚು ಮಾಡಿ ಚುನಾವಣೆ ನಡೆಸೋ ಬದಲು, ಯಾರಾದ್ರು ಒಬ್ಬ ಜ್ಯೋತಿಷಿನ ಹುಡುಕಿ, ಅವನು ಯಾವ ಪಕ್ಷ ಹೇಳ್ತೊನೋ ಆ ಪಕ್ಷಕ್ಕೆ ಅಧಿಕಾರ ಕೊಟ್ರೆ ಎಲ್ಲಾ ಎಸ್ಟು ಸಲಿಸು ಅಲ್ವಾ?...
ಬಿಜೆಪಿ, ಹೇಗೆ ಗೆದ್ರು ಅಂತ ಯಾರುನಾದ್ರು ಕೇಳಿದ್ರೆ ಉತ್ತರ ಕೊಡೋದು ಕಷ್ಟನೆ, ಬೇರೆ ಯಾರು ಯಾಕೆ? ನಮ್ಮ ಮುಖ್ಯಮಂತ್ರಿ ಅವರನ್ನೇ ಕೇಳಿದ್ರು ಅವರಿಗೂ ಉತ್ತರ ಹುಡುಕೋದು ಕಷ್ಟನೆ. ಇದೆ ಪ್ರಶ್ನೆ ನ ಬಿಜೆಪಿ ಗೆದ್ದ ಬಳಿಕ ಪತ್ರಕತ್ರರು ಬಿಜೆಪಿಯ "Brian man" ಅರುಣ್ ಜೇಟ್ಲಿ ಯವರನ್ನು ಕೇಳಿದಕ್ಕೆ, "ಬೇರೆ ಪಕ್ಷದವರು ಅವರ ಪಕ್ಷದಿಂದ ಯಾರು ಮುಖ್ಯಮಂತ್ರಿ ಎಂದು ಹೆಸರಿಸುವುದನ್ನ ಬಿಟ್ಟಿದ್ದರು ಆದರೆ ನಾವು ಮೊದಲಿನಿಂದಲೂ ಯಡಿಯುರಪ್ಪನವರೇ ನಮ್ಮ ಮುಖ್ಯಮಂತ್ರಿ ಎಂದು ಬಿಂಬಿಸಿದರಿಂದ ಗೆಲುವು ಸುಲಭವಾಯಿತು" ಎಷ್ಟು ಸಾಧಾರಣ ಪ್ರಶ್ನೆಗೆ ಎಷ್ಟು ಸಾಧಾರಣ ಉತ್ತರ ಅಲ್ವಾ?... ಇಂತ ಉತ್ತರ ಅರುಣ್ ಜೇಟ್ಲಿ ಅಂಥ ಪಳಗಿದ ರಾಜಕಾರಣಿಯಿಂದ ಮಾತ್ರ ಬರಲು ಸಾಧ್ಯ.
ಬರೀ ಮುಖ್ಯಮಂತ್ರಿಯ ಹೆಸರು ಸೂಚಿಸಿರುವುದರಿಂದ ಮಾತ್ರ ಒಂದು ಪಕ್ಷ ಗೆಲುತ್ತೆ ಅಂದ್ರೆ ನಾನು ನಂಬಲ್ಲ, ನನ್ನ ಪ್ರಕಾರ ಬಿಜೆಪಿ ಗೆದ್ದಿದೆ ಅನ್ನುವುದಕ್ಕಿಂತ ಬೇರೆ ಪಕ್ಷದವರು ಸೋತಿದ್ದಾರೆ ಅನ್ನುವುದು ಹೆಚ್ಚು ಸುಕ್ತಾ. ಅಸಲು ಪ್ರತೀ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನು ಗಮನಿಸಿದರೆ ಎಲ್ಲದರಲ್ಲೂ ಇದ್ದಿದ್ದು ಒಂದೇ, ಬೆಲೆ ಏರಿಕೆ, ರೈತ-ಹಳ್ಳಿ ಉದ್ದಾರ, ಹಾಳು ಮುಳು ಅಷ್ಟೆ. ಈ ಚುನಾವಣೆಯಲ್ಲಿ ಜಾಸ್ತಿ ಹೊಡ್ತಾ ಬಿದ್ದಿದ್ದು ಅಂದ್ರೆ ಕಾಂಗ್ರೆಸ್ಸಿಗೆ, ಸೋನಿಯಾ ಗಾಂಧಿ ಏನಾದ್ರು ಕ್ರಿಶ್ಚಿಯನ್ ಧರ್ಮ ಪ್ರಚಾರ ಮಾಡುವದರಲ್ಲಿ ತೋರಿಸಿದಷ್ಟು ಆಸಕ್ತಿ ಸ್ವಲ್ಪನಾದ್ರೂ ಕರ್ನಾಟಕದ ಚುನಾವಣೆ ಮೇಲೆ ತೋರಿಸಿದ್ದರೆ ಕಾಂಗ್ರೆಸ್ಸಿಗೆ ಇನ್ನೊಂದಿಷ್ಟು ಸೀಟುಗಳು ಬರುತ್ತಿತ್ತೇನೋ??. ಇತ್ತ ದೇವೇಗೌಡ ಮತ್ತು ಅವರ ಮಕ್ಕಳದ್ದು ಅದೇ ಹಳೇ ಕತೆ, ಜನ ಎಷ್ಟು ದಿನ ಅಂತ ಕೇಳಿದ್ದೆ ಕೇಳ್ತಾರೆ. ನಿಜ ಹೇಳಬೇಕೆಂದರೆ ದೇವೇಗೌಡರಿಗೆ ಜಾಸ್ತಿ ಹೊಡ್ತಾ ಕೊಟ್ಟಿದ್ದು ಪತ್ರಕತ್ರರು, ಯಾಕೋ ಏನೋ, ಎಲ್ಲರೂ ಒಂದೇ ಸತಿ ಅವರಿಗೆ ತಿರುಗಿ ಬಿದ್ದುಬಿಟ್ರು, ಈ ಹೊಡೆತದಿಂದ ಮೇಲೆ ಏಳಕ್ಕೆ ದೇವೇಗೌಡರಿಗೆ ಇನ್ನೂ ಕೆಲವು ವರುಷಗಳಾದ್ರು ಬೇಕು. ಇನ್ನ ಕೆಲವು ಐ ಟಿ ಜನ ಕೂಡ ಚುನಾವಣೆಯಲ್ಲಿ ಸ್ಪರ್ದಿಸಿ, ಎಸ್ ಎಂ ಎಸ್, ಬ್ಲಾಗ್, ವೆಬ್ ..... ಹೀಗೆ ನಾನಾತರಗಳಿಂದ ಪ್ರಚಾರ ಕಾರ್ಯ ಕೈಗೊಂಡಿದ್ದು ಸುದ್ದಿಯಾಗಿತ್ತು, ಆದರೆ ಅಸಲು ಬ್ಲಾಗ್, ವೆಬ್, ಈ-ಮೈಲ್ ಓದೋವರು ಯಾರು ಮತ ಗಟ್ಟೆ ಕಡೆ ತಲೆ ಹಾಕೊಲ್ಲ ಅನ್ನೋದು ಈ ಐ ಟಿ ಜನಗಳಿಗೆ ಯಾಕೆ ಅರ್ಥ ಅಗಿಲ್ವೋ ನಾ ಕಾಣೆ. ಏನೇ ಅಂದ್ರು ಇಂತ ಜನಗಳು ಚುನಾವಣೆಗೆ ಧುಮುಕುತಿರುವುದು ಶುಭ ಸಂಕೇತ, ಆದರೆ ಇಂತವರು ಅಧಿಕಾರಕ್ಕೆ ಬರಲು ನಾವು ಇನ್ನೂ ಸ್ವಲ್ಪ ದಿನ ಕಾಯಬೇಕು, ಅಲ್ಲಿವರೆಗೂ ನಮಗೆ ದೇವೇಗೌಡ, ರೇವಣ್ಣ, ಕೂಮಾರ ಸ್ವಾಮಿ ಗಳು ತಪ್ಪಿದಲ್ಲ.
ಒಟ್ನಲ್ಲಿ ಏನು ಅಲ್ದಲೇ ಇದ್ರು, ಈ ಸತಿ ಸದ್ಯ ಆ ಮೈತ್ರಿ ಸರ್ಕಾರ...... ಆ ರೆಸಾರ್ಟ್ ನ ದೊಂಬರಾಟ... ದೇವೇಗೌಡರ ಶಾನೆ ರಾಜಕೀಯ.... ಇವೆಲ್ಲ ಇಲ್ದಲೇನೆ ಒಂದು ಸರ್ಕಾರ ರಚನೆ ಆಗಿದೆ, ಅಷ್ಟಕಾದ್ರು ಯಡಿಯುರಪ್ಪನವರಿಗೆ ನಾವು ಒಂದು ಥ್ಯಾಂಕ್ಸ್ ಹೇಳಬೇಕು. ಅಷ್ಟಕ್ಕೂ ಹೊಸ ಸರ್ಕಾರ ಈಡೀ ಕರ್ನಾಟಕವನ್ನೇ ಬದಲಾಯಿಸುತ್ತೆ ಅಂದುಕೊಂಡರೆ ಅದು ನಮ್ಮ ತಪ್ಪು. ಅಷ್ಟಕ್ಕೂ ಇವರು ಕೂಡ ರಾಜಕಾರಣಿಗಳೇ, ಅತೀಯಾದ ನೀರೆಕ್ಷೆ ಇಲ್ಲದೇನೆ ಕಾದು ನೋಡೋಣ, ಇವರೂ ಮುಂಚಿನವರ ಹಾಗೆ ನಾಲಾಯಕ್ಕು ಅಂತಾದರೆ ಮತ್ತೆ ಹೇಗಿದ್ರೂ ಚುನಾವಣೆ ಬಂದೆ ಬರುತ್ತೆ, ಆಗ ಮತ್ತೆ ಕಾಂಗ್ರೆಸ್ಸಿಗೋ, ಜನತಾ ದಳ ಕ್ಕೋ ಗುದ್ದೀದರಾಯ್ತು.... ಏನಂತೀರ???