ಯಾವುದಾದರು ಕನ್ನಡ ಹಾಡು ಕೇಳೋಣ ಅಂದ ತಕ್ಷಣ, ಕೈ ಗೆ "old kannada songs" ಸಿಡಿ ಬಂದಿರುತ್ತೆ. ಯಾವುದಾದರು ಹೊಸ ಹಾಡು ಗುನುಗೋಣ ಅಂದ್ರೆ... ಹುಂಹೂ ಜಪ್ಪಯ್ಯ ಅಂದ್ರು ಒಂದು ಲೈನ್ ಆಚಗೆ ಯಾವ ಹಾಡು ದಾಟಲ್ಲ. ಅದೇನಪ್ಪ ನಮ್ಮ ಜಮಾನದ್ದು ಹಾಡುಗಳ ಹಣೆಬರನೆ ಅಷ್ಟೋ ಅಥವಾ ನಂಗೆ ರುಚಿ ಇಲ್ವೋ... ಇತ್ತೇಚೆಗೆ ಒಳ್ಳೆ ಹಾಡುಗಳು ಬಂದಿಲ್ಲ ಅಂತಲ್ಲ... "ಈ ಭೂಮಿ ಬಣ್ಣದ ಭುಗುರಿ"..... "ನೂರು ಜನ್ಮಕು" ಹೀಗೆ ಅಲ್ಲೊಂದು ಇಲ್ಲೊಂದು, ಅದು ಬಿಟ್ರೆ ಹೆಚ್ಚಿನ ಹಾಡುಗಳೆಲ್ಲ ಬಳಕುವ ಸೊಂಟಕ್ಕೋ, ಸೀರೆ ಸಂದಿಯಲ್ಲಿ ಇಣುಕುವ ಹೊಕ್ಕಳಕ್ಕೋ ಅಥವಾ ತುಂಬಿದೆದೆಗೆ ಮೀಸಲು, ಇಂಥ ಹಾಡುಗಳನ್ನು ಎಷ್ಟು ಅಂತಾ ಕೇಳೋದು?. ಬೆಂಗಳುರಿನಲ್ಲಿದ್ದಾಗ ಹಂಗು-ಇಂಗು ರೇಡಿಯೋದಲ್ಲಿ ಅಲ್ಪ ಸ್ವಲ್ಪ ಕನ್ನಡ ಹಾಡದ್ರು ಕೇಳ್ತಾ ಇದ್ದೆ, ದೇಶ ಬಿಟ್ಟು ಬಂದ ಮೇಲೆ ಅದು ಬಿಟ್ಟೋಯ್ತು.
ಇದ್ದಕಿದ್ದ ಹಾಗೆ ಒಂದು ದಿನ "ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೇ" ಅನ್ನೋ ಲೈನ್ ಕಿವಿ ಗೆ ಬಿತ್ತು.... ಯಾರೋ ಇದು ಬರೆದಿರೋದು ಅಂತ ತಮ್ಮನ ವಿಚಾರಿಸಿದಕ್ಕೆ, ಜಯಂತ್ ಕೈಕಿಣಿ ಅವರ ವಿವರ ಕೊಟ್ಟಿದ್ದು ಅಲ್ದಲ್ಲೇ "ಮುಂಗಾರು ಮಳೆ" ಚಿತ್ರದ ಎಲ್ಲಾ ಹಾಡುಗಳ ಒಂದು ಪಿಡಿಫ್ ಫೈಲೇ ಕಳಿಸಿದ್ದ. ಈಗ ಕೆಲವು ೫ ವರ್ಷಗಳ ಕೆಳಗೆ ಯಾರದ್ರು ಯುವಕರು ಅದರಲ್ಲೂ ಸಾಫ್ಟ್ ವೆರು ಹುಡುಗರು ಐಪಾಡ್ ನಲ್ಲಿ ಕನ್ನಡ ಹಾಡು ಕೇಳುತ್ತಾ, ಒಬ್ಬರಿಗೊಬ್ಬರು ಹಾಡುಗಳ ಸಾಹಿತ್ಯನ forward ಮಾಡ್ಕೊತಾರೆ ಅಂತ ಹೇಳಿದ್ರೆ ನಾನು ನಂಬ್ತಿರಲಿಲ್ಲ, ಆದ್ರೆ thanks to this man..... ಎಲ್ಲಾ ಬದಲಾಗಿದೆ.
ಜಯಂತ್ ಕೈಕಿಣಿ ಅವರ "ರಸ ಋಷಿಗೆ ನಮನ" ಎಂಬ ಕಾರ್ಯಕ್ರಮ ನೋಡಿದ್ದು ಬಿಟ್ರೆ ಅವರ ಬಗ್ಗೆ ಆಗಲೀ ಅವರ ಸಾಹಿತ್ಯದ ಬಗ್ಗೆ ಆಗಲೀ ನಂಗೆ ಹೆಚ್ಚು ಗೊತ್ತಿರ್ಲಿಲ್ಲ. ಆದರೆ ಈಗ ಹಾಡುಗಳನ್ನೆಲ್ಲಾ ಕೇಳಿದ ಮೇಲೆ ಅವರ "ತೂಫಾನ್ ಮೇಲ್" "ಬೊಗಸೆಯ ಮಳೆಯಲ್ಲಿ" ಓದಬೇಕೆಂಬ ಆಸೆ ಶುರುವಾಗಿದೆ. ಅದು ನಿಜ ಆಗ ಬೇಕೆಂದರೆ ನಾನು ಇಂಡಿಯಾ ಗೆ ವಾಪಸ್ಸು ಹೋಗಬೇಕು.... ಅಲ್ಲಿ ವರೆಗೂ ..
"ಹಣೆಯಲ್ಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ" ....
"ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ"...
"ಮಳೆ ನಿಂತು ಹೋದ ಮೇಲೆ, ಹನಿಯೊಂದು ಮೂಡಿದೆ"....
ಇಂತ ಲೈನ್ ಗಳು ಸಾಕು .....
ಕನ್ನಡ ಚಲನ ಚಿತ್ರ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟಿದಕ್ಕೆ, ಅದರಲ್ಲೂ ನಮ್ಮಂತ ಯುವಕರಿಗೆ ಸಾಹಿತ್ಯದ ಹುಚ್ಚು ಹಿಡಿಸಿದಕ್ಕೆ ... ಜಯಂತ್ ಕೈಕಿಣಿ ಸರ್...ನಿಮಗೊಂದು ಸಲ್ಯೂಟ್ ....ನಾವೆಲ್ಲ ನಿಮಗೆ ಋಣಿ...
"ಪ್ರಾಣ ಉಳಿಸೋ ಕಾಯಿಲೆಗೆ ಪ್ರೀತಿ ಎಂದು ಎನ್ನ ಬಹುದೇ".....
"ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು"... ಎಂದವರಿಗೆ ಒಂದು ಸಲಾಮ್ ಹೊಡೆಯುತ್ತಾ...!!!
Subscribe to:
Post Comments (Atom)

1 comment:
ಜಯಂತ್ ಕಾಯ್ಕಿಣಿ ನನಗೂ favorite ಕಣ್ರೀ. ಅವರ್ ಪುಸ್ತಾಗಳನ್ನೆಲ್ಲಾ ಓದಿದ್ದೇನೆ. ಇತ್ತೀಚೆಗೆ ಅವರ ಕವನ ಸಂಕಲನಗಳು ಬಿಡುಗಡೆಯಾಗಿವೆ. ಅವನ್ನು ಓದಿಲ್ಲ.
Post a Comment